
ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಗ್ರಾಮದಲ್ಲಿ ನೀಡಿದ್ದ 2 ಲಕ್ಷ ರೂಪಾಯಿ ಕೈಗಡ ಹಣವನ್ನು ವಾಪಸ್ ಕೇಳಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಸೂರ್ಯಕಾಂತ ಜಮಾದಾರ ಅವರು ಹುಣಚಪ್ಪ ಮರತೂರ ಎಂಬುವವರಿಗೆ ನೀಡಿದ ಹಣವನ್ನು ವಾಪಸ್ ಕೇಳಲು ತೆರಳಿದಾಗ ಬೀರಲಿಂಗೇಶ್ವರ ದೇವಸ್ಥಾನದ ಬಳಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ.
ಈ ಸಂಬಂಧ ಹುಣಚಪ್ಪ ಮಲ್ಲಪ್ಪ ಮರತೂರ ಹಾಗೂ ರಾಜು ಮಲ್ಲಪ್ಪ ಮರತೂರ ವಿರುದ್ಧ ಸೆಪ್ಟೆಂಬರ್ 10ರಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.