
ಬೆಂಗಳೂರಿನ ಯಡಿಯೂರು ಕೆರೆ ಭೂವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಸೆಕ್ಷನ್ 56ರ ಅಡಿಯಲ್ಲಿ 3 ವರ್ಷಗಳ ಕಾಲಮಿತಿ ಮೀರಿದ ಬಳಿಕ ಮರುಪರಿಶೀಲನೆ ನಡೆಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಚ್ದೇವ ಪೀಠ ಸ್ಪಷ್ಟಪಡಿಸಿದೆ.
2014ರಲ್ಲಿ ಕಂದಾಯ ಅಧಿಕಾರಿಗಳು ಜಮೀನು ಮಾಲೀಕರಿಗೆ ನೀಡಿದ್ದ ಹೊಸ ತನಿಖೆಯ ನೋಟಿಸ್ ಅನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಕಾನೂನುಬದ್ಧ ಕಾಲಮಿತಿಯನ್ನು ಮೀರಿ ತನಿಖೆ ನಡೆಸುವಂತಿಲ್ಲ ಎಂದು ಆದೇಶಿಸಿದೆ.