
ಹಂಗೆರಿಯಲ್ಲಿ ನಡೆದ ಪ್ರತಿಷ್ಠಿತ ಕನಿಝ್ಸಾ ಓಪನ್ ಚೆಸ್ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್ಮಾಸ್ಟರ್ ಪ್ರಾಣೇಶ್ ಎಂ. ಅವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಒಂಬತ್ತನೇ ಅಂತಿಮ ಸುತ್ತಿನಲ್ಲಿ ಜರ್ಮನಿಯ ವಿದಿಮ್ ಪೆಟ್ರೊವ್ಸ್ಕಿ ಅವರನ್ನು ಸೋಲಿಸಿದ ಪ್ರಾಣೇಶ್, ಒಟ್ಟು 9 ಸುತ್ತುಗಳಿಂದ 7 ಪಾಯಿಂಟ್ಸ್ ಸಂಗ್ರಹಿಸಿದರು.
ಪ್ರಾಣೇಶ್ ಅವರು ಉತ್ತಮ ಟೈಬ್ರೇಕ್ ಸ್ಕೋರ್ ಹೊಂದಿದ್ದರಿಂದ ಕಾರ್ತಿಕ್ ವೆಂಕಟರಾಮನ್ ಸೇರಿದಂತೆ ಇತರ ಆಟಗಾರರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದರು.