
ಮಂಗಳೂರಿನ ಉಳ್ಳಾಲ ಅಳಿವೆಬಾಗಿಲಿನಲ್ಲಿ ಶನಿವಾರ ಸಂಜೆ 'ಅಯಾನ್' ಹೆಸರಿನ ಮೀನುಗಾರಿಕೆ ಬೋಟ್ ಕಲ್ಲಿಗೆ ಬಡಿದು ಮುಳುಗಡೆಯಾಗಿದೆ.
ಇಬ್ರಾಹಿಂ ಖಲೀಲ್ ಅವರ ಮಾಲೀಕತ್ವದ ಬೋಟ್ನಲ್ಲಿದ್ದ ಆರು ಮಂದಿ ಮೀನುಗಾರರನ್ನು ಸ್ಥಳದಲ್ಲಿದ್ದ ಇತರ ಬೋಟ್ನವರು ರಕ್ಷಿಸಿ ದಡ ಸೇರಿಸಿದ್ದಾರೆ.
ಬೋಟ್ನ ತಳಭಾಗ ಕಲ್ಲಿಗೆ ಬಡಿದು ಒಡೆದಿದ್ದರಿಂದ ಒಳಗೆ ನೀರು ನುಗ್ಗಿ ಈ ದುರಂತ ಸಂಭವಿಸಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.