
ಆಂಧ್ರಪ್ರದೇಶದ ಪೀಪುಲ್ಲಿ ಮಂಡಲದ 500 ವರ್ಷಗಳ ಇತಿಹಾಸವಿರುವ ಕಲ್ಯಾಣಿಯನ್ನು ಕಸದಿಂದ ಮುಕ್ತಗೊಳಿಸಲು ಅಬ್ಬಾಯಿ ಕಾಂತ್ ನೇತೃತ್ವದಲ್ಲಿ ಅಭಿಯಾನ ನಡೆಸಲಾಯಿತು.
ಸುಮಾರು 300ಕ್ಕೂ ಹೆಚ್ಚು ಸ್ವಯಂಸೇವಕರು ಹಗಲಿರುಳು ಶ್ರಮಿಸಿ ಟನ್ ಗಟ್ಟಲೆ ತ್ಯಾಜ್ಯವನ್ನು ಹೊರತೆಗೆದು ಪುರಾತನ ಸ್ಥಳವನ್ನು ಪುನಶ್ಚೇತನಗೊಳಿಸಿದರು.
ಈ ಕಾರ್ಯವನ್ನು ಮೆಚ್ಚಿದ ನಟ ಆರ್. ಮಾಧವನ್ ಅವರು ಸ್ವಚ್ಛತಾ ಕಾರ್ಯದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.