
ತಮಿಳುನಾಡಿನ ಕಾವೇರಿ ನೀರು ಹರಿಸುವ ಅರ್ಜಿಯ ವಿಚಾರಣೆ ಹಿನ್ನೆಲೆ, ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ಗೆ ಪ್ರತ್ಯುತ್ತರ ಸಲ್ಲಿಸಿದ್ದು, ಎಲ್ ನಿನೋ ಪರಿಣಾಮದಿಂದ ರಾಜ್ಯದ 4 ಡ್ಯಾಂಗಳಲ್ಲಿ ಶೇ. 65.76ರಷ್ಟು ಒಳಹರಿವಿನ ಕೊರತೆಯಿದೆ ಎಂದು ತಿಳಿಸಿದೆ.
ಜುಲೈ 29ರಿಂದ ಆಗಸ್ಟ್ 10ರವರೆಗೆ ಬಿಳಿಗುಂಡ್ಲು ಮೂಲಕ ತಮಿಳುನಾಡಿಗೆ 86,797 ಕ್ಯೂಸೆಕ್ ನೀರು ಹರಿದಿದ್ದು, ಜಲಾಶಯಗಳಿಂದ ಒಟ್ಟು 1,64,080 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.
ಸಂಕಷ್ಟದ ವರ್ಷದಲ್ಲಿ ಪ್ರೊ-ರೇಟಾ ಆಧಾರದಲ್ಲಿ ನೀರು ಹಂಚಿಕೆ ಮಾಡದಿದ್ದರೆ ಅನ್ಯಾಯವಾಗುತ್ತದೆ ಎಂದು ಹಿರಿಯ ವಕೀಲ ಮೋಹನ್ ವಿ.ಕಾತರಕಿ ವಾದ ಮಂಡಿಸಿದ್ದಾರೆ.