
ಹಾವೇರಿ ಜಿಲ್ಲೆಯ 22 ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ನಿವೇದಿತಾ, ಕಳೆದ 7 ತಿಂಗಳಿಂದ ಕಾಡುತ್ತಿದ್ದ ಅಪರೂಪದ ಆಟೋ ಇಮ್ಯೂನ್ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಮೆದುಳಿನ ಮೇಲೆ ಪರಿಣಾಮ ಬೀರಿದ್ದ ಈ ಕಾಯಿಲೆಗೆ ಐದಾರು ಲಕ್ಷ ರೂಪಾಯಿ ಖರ್ಚು ಮಾಡಿದರೂ ಗುಣವಾಗದಿದ್ದಾಗ, ಕುಟುಂಬಸ್ಥರು ಹೊಸರಿತ್ತಿ ರಾಯರ ಮಠದ ಮೊರೆ ಹೋಗಿದ್ದರು.
ಸುಭುದೇಂದ್ರ ತೀರ್ಥ ಸ್ವಾಮೀಜಿಗಳ ಸಲಹೆಯಂತೆ ಐದು ವಾರಗಳ ಹರಕೆ ತೀರಿಸಿದ ಬಳಿಕ, ವಿದ್ಯಾರ್ಥಿನಿ ವೀಲ್ಚೇರ್ ತೊರೆದು ಸ್ವತಃ ನಡೆದಾಡುವಷ್ಟು ಆರೋಗ್ಯ ಸುಧಾರಣೆ ಕಂಡಿದ್ದಾರೆ.