
ಈ ವರ್ಷದ ಶ್ರಾವಣ ಅಮಾವಾಸ್ಯೆಯು ಸೆಪ್ಟೆಂಬರ್ 10ರ ಬೆಳಿಗ್ಗೆ 10:33ಕ್ಕೆ ಪ್ರಾರಂಭವಾಗಿ, ಸೆಪ್ಟೆಂಬರ್ 11ರ ಬೆಳಿಗ್ಗೆ 8:56ಕ್ಕೆ ಮುಕ್ತಾಯಗೊಳ್ಳಲಿದೆ.
ಅಮಾವಾಸ್ಯೆಯ ಮಧ್ಯರಾತ್ರಿ 12 ಗಂಟೆಗೆ ಮನೆಯ ಮುಖ್ಯ ದ್ವಾರದ ಮುಂದೆ ಎಳ್ಳೆಣ್ಣೆಯ ದೀಪ ಹಚ್ಚುವುದರಿಂದ ಆರ್ಥಿಕ ಸಂಕಷ್ಟಗಳು ದೂರವಾಗಿ ಲಕ್ಷ್ಮಿ ಕೃಪೆ ಲಭಿಸುತ್ತದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.
ಈ ದಿನದಂದು ಕನಕಧಾರಾ ಸ್ತೋತ್ರ ಪಠಣ, ಅನ್ನದಾನ ಮತ್ತು ಕಪ್ಪು ಎಳ್ಳು ದಾನ ಮಾಡುವುದು ವಿಶೇಷ ಪುಣ್ಯ ಫಲಗಳನ್ನು ನೀಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.