
ವಿಜಯಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಯಶವಂತಪುರ ಎಕ್ಸ್ಪ್ರೆಸ್ ರೈಲು ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದರಿಂದ ನೂರಾರು ಪರೀಕ್ಷಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ರೈಲು ಸಂಖ್ಯೆ 16548 ವಿಜಯಪುರದಿಂದ ಮಧ್ಯಾಹ್ನ 2:50ಕ್ಕೆ ಹೊರಟು ಕೇವಲ 4 ಕಿಲೋಮೀಟರ್ ಕ್ರಮಿಸಿದ ಬಳಿಕ ಇಂಜಿನ್ ವೈಫಲ್ಯದಿಂದ ನಿಂತುಹೋಗಿತ್ತು.
ಪರೀಕ್ಷಾರ್ಥಿಗಳು ಬಸವ ಎಕ್ಸ್ಪ್ರೆಸ್ ರೈಲನ್ನು ತಡೆದು ಪ್ರತಿಭಟನೆ ನಡೆಸಿದ ನಂತರ, ರೈಲ್ವೇ ಅಧಿಕಾರಿಗಳು ಪರ್ಯಾಯ ಇಂಜಿನ್ ಜೋಡಿಸಿ ಸಂಚಾರವನ್ನು ಪುನರಾರಂಭಿಸಿದರು.