
ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಖಳನಟನಾಗಿ ಜನಪ್ರಿಯರಾಗಿದ್ದ 74 ವರ್ಷದ ಹಿರಿಯ ನಟ ಪ್ರದೀಪ್ ರಾವತ್ ಅವರು ಆಗಸ್ಟ್ 4ರಂದು ಬ್ಲಡ್ ಕ್ಯಾನ್ಸರ್ನಿಂದ ನಿಧನರಾಗಿದ್ದಾರೆ.
ಬಿ.ಆರ್. ಚೋಪ್ರಾ ಅವರ ಮಹಾಭಾರತ ಧಾರಾವಾಹಿಯ ಅಶ್ವತ್ಥಾಮ ಪಾತ್ರ ಮತ್ತು ಘಜಿನಿ ಸಿನಿಮಾದ ಘಜಿನಿ ಧರ್ಮತ್ಮ ಪಾತ್ರದ ಮೂಲಕ ಅವರು ದೇಶಾದ್ಯಂತ ಮನೆಮಾತಾಗಿದ್ದರು.
ತೆಲುಗಿನ ಸೈ ಚಿತ್ರದ ಭಿಕ್ಷು ಯಾದವ್ ಪಾತ್ರಕ್ಕಾಗಿ ಫಿಲ್ಮ್ಫೇರ್ ಅತ್ಯುತ್ತಮ ಖಳನಟ ಪ್ರಶಸ್ತಿ ಪಡೆದಿದ್ದ ಅವರು, ಕನ್ನಡದ ಗಜ, ಅಭಯ್ ಮತ್ತು ಬಚ್ಚನ್ ಸಿನಿಮಾಗಳಲ್ಲಿಯೂ ನಟಿಸಿದ್ದರು.