
ತಮಿಳುನಾಡಿನ ಮಧುರೈ ಅರುಳ್ಮಿಗು ಮೀನಾಕ್ಷಿ ಸುಂದರೇಶ್ವರರ್ ದೇವಾಲಯದ ಮಹಾ ಕುಂಭಾಭಿಷೇಕ ಮಹೋತ್ಸವವು ಸೆಪ್ಟೆಂಬರ್ 17ರಂದು ವೈಭವೋಪೇತವಾಗಿ ನಡೆಯಲಿದೆ.
ದೇವಾಲಯದ ನಾಲ್ಕು ರಾಜಗೋಪುರಗಳು ಮತ್ತು ಅಮ್ಮನವರ ಸನ್ನಿಧಿಯ ಗೋಪುರಕ್ಕೆ ನೂತನ ಬಣ್ಣ ಬಳಿಯಲಾಗಿದ್ದು, ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಲಾಗಿದೆ.
ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ದೇವಾಲಯದ ಆವರಣದಲ್ಲಿ ಸಾಂಪ್ರದಾಯಿಕ ಯಾಗಶಾಲೆ ಪೂಜಾ ವಿಧಿವಿಧಾನಗಳು ಈಗಾಗಲೇ ಚಾಲನೆ ಪಡೆದುಕೊಂಡಿವೆ.