
ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಜ್ಯೋತಿಷ್ಯ ಹಾಗೂ ಚೌಡೇಶ್ವರಿ ಪೂಜೆ ಮಾಡುವುದಾಗಿ ನಂಬಿಸಿ 62 ವರ್ಷದ ಶಾಂತಮ್ಮ ಎಂಬುವವರ 40 ಲಕ್ಷ ರೂ. ಚಿನ್ನಾಭರಣವನ್ನು ವೆಂಕಟೇಶ್ ಎಂಬಾತ ದೋಚಿದ್ದಾನೆ.
ಕಳೆದ ಒಂದು ವರ್ಷದಿಂದ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಒಡವೆಗಳನ್ನು ಪಡೆದಿದ್ದ ಆರೋಪಿ, ಆಗಸ್ಟ್ 19 ರಂದು ಒಡವೆ ವಾಪಸ್ ಕೇಳಿದಾಗ ವಂಚನೆ ಎಸಗಿದ್ದಾನೆ.
ವರಮಹಾಲಕ್ಷ್ಮಿ ಹಬ್ಬದಂದು ಒಡವೆ ಕೇಳಿದಾಗ ತನಗೆ ಅಪಘಾತವಾಗಿದೆ ಎಂದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಮೂಲಕ ನಕಲಿ ವೀಡಿಯೋ ಸೃಷ್ಟಿಸಿ ಕಳುಹಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.