
ದಕ್ಷಿಣ ರೈಲ್ವೆ ವಲಯದ ಚೆನ್ನೈ ವಿಭಾಗದಲ್ಲಿ ಹಳಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಬೆಂಗಳೂರಿನಿಂದ ಸಂಚರಿಸುವ ಹಲವು ಎಕ್ಸ್ಪ್ರೆಸ್ ಮತ್ತು ಮೆಮು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.
2026ರ ಆಗಸ್ಟ್ 11 ಮತ್ತು 26ರಂದು ಸಂಚರಿಸುವ ಕೆಎಸ್ಆರ್ ಬೆಂಗಳೂರು-ಜೋಲಾರ್ ಪೇಟೈ ಮೆಮು ರೈಲುಗಳು (66550 ಮತ್ತು 66549) ಸೋಮನಾಯಕನಪಟ್ಟಿ ಮತ್ತು ಜೋಲಾರ್ ಪೇಟೈ ನಡುವೆ ಭಾಗಶಃ ರದ್ದಾಗಲಿವೆ.
ಇಗತ್ಪುರಿ-ಭೂಸಾವಲ್ ನಡುವಿನ ಕಾಮಗಾರಿಯಿಂದಾಗಿ ಆಗಸ್ಟ್ 11ರ ಬೆಂಗಳೂರು-ನವದೆಹಲಿ ಕರ್ನಾಟಕ ಎಕ್ಸ್ಪ್ರೆಸ್ (12627) ಸೇರಿದಂತೆ ಹಲವು ರೈಲುಗಳ ಸಂಚಾರ ಮಾರ್ಗಮಧ್ಯೆ 1 ಗಂಟೆಗೂ ಹೆಚ್ಚು ಕಾಲ ವಿಳಂಬವಾಗಲಿದೆ.