
ಅಮೆರಿಕದ ಕ್ಯಾಲಿಫೋರ್ನಿಯಾದ ಮಿಲ್ಪಿಟಾಸ್ನಲ್ಲಿ ಆಗಸ್ಟ್ 28ರಂದು ಕೇರಳ ಮೂಲದ ಅಂಜನಾ ಹರಿ ಮತ್ತು ಆನ್ ಮ್ಯಾಥ್ಯೂ ಎಂಬ ಇಬ್ಬರು ಶಿಕ್ಷಕಿಯರನ್ನು ಅವರ ಸ್ನೇಹಿತೆ ಅನಿಲಾ ಹತ್ಯೆ ಮಾಡಿದ್ದಾರೆ.
ಆರೋಪಿ ಅನಿಲಾ ಮೊದಲು ಆನ್ ಮ್ಯಾಥ್ಯೂ ಅವರನ್ನು ಚಾಕುವಿನಿಂದ ಇರಿದು, ನಂತರ ಪಾರ್ಕಿಂಗ್ ಪ್ರದೇಶದಲ್ಲಿದ್ದ ಅಂಜನಾ ಹರಿ ಅವರ ಮೇಲೆ ಎಸ್ಯುವಿ ಕಾರನ್ನು ವೇಗವಾಗಿ ಚಲಾಯಿಸಿ ಕೊಲೆ ಮಾಡಿದ್ದಾಳೆ.
32 ವರ್ಷದ ಆರೋಪಿ ಅನಿಲಾನನ್ನು ಪೊಲೀಸರು ಬಂಧಿಸಿದ್ದು, ಮೃತದೇಹಗಳನ್ನು ಭಾರತಕ್ಕೆ ರವಾನಿಸಲು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸದ ಮೂಲಕ ಕೇಂದ್ರ ಸಚಿವ ಸುರೇಶ್ ಗೋಪಿ ಕ್ರಮ ಕೈಗೊಂಡಿದ್ದಾರೆ.