
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸ್ಪರ್ಧಿಗಳಾದ ಅವಿನಾಶ್ ಹಾಗೂ ಮಾಡ್ರನ್ ಮಹಾಕವಿ ಮಂಜು ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಕಿಚನ್ ಹಾಗೂ ಊಟದ ಮೇಜಿನ ಬಳಿ ಆಹಾರ ಮತ್ತು ವ್ಯಕ್ತಿತ್ವದ ಕುರಿತು ಆರಂಭವಾದ ಸಂಭಾಷಣೆಯು ನಂತರ ವೈಯಕ್ತಿಕ ನಿಂದನೆಗೆ ತಿರುಗಿದೆ.
ಮಂಜು ಮತ್ತು ಅವಿನಾಶ್ ಪರಸ್ಪರ ಹತ್ತಿರ ಬಂದು ಕೆರಳಿಸುವಂತೆ ಮಾತನಾಡಿದ್ದು, ಅವಿನಾಶ್ ಬಾಟಲಿಯನ್ನು ಕುಟ್ಟಿದ್ದಾರೆ.