Indian Politics
ಲಕ್ನೋದಲ್ಲಿ ಅಖಿಲೇಶ್ ಯಾದವ್ ಸಭೆಯಲ್ಲೇ ಎಸ್ಪಿ ನಾಯಕರ ಜಗಳ; ಜಿಲ್ಲಾ ಘಟಕ ವಿಸರ್ಜನೆ

ಲಕ್ನೋದಲ್ಲಿ ಅಖಿಲೇಶ್ ಯಾದವ್ ಸಭೆಯಲ್ಲೇ ಎಸ್ಪಿ ನಾಯಕರ ಜಗಳ; ಜಿಲ್ಲಾ ಘಟಕ ವಿಸರ್ಜನೆ

tv9kannada1h
THE BRIEF
1

ಉತ್ತರ ಪ್ರದೇಶದ ಲಕ್ನೋದಲ್ಲಿ 2027ರ ವಿಧಾನಸಭಾ ಚುನಾವಣೆ ಸಿದ್ಧತೆ ಕುರಿತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸಮ್ಮುಖದಲ್ಲೇ ಇಬ್ಬರು ಹಿರಿಯ ನಾಯಕರು ಬಹಿರಂಗವಾಗಿ ಜಗಳವಾಡಿದ್ದಾರೆ.

2

ಸಭೆಯಲ್ಲಿ ಎಟಾ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಯೋಗೇಂದ್ರ ಸಿಂಗ್ ಯಾದವ್ ಹಾಗೂ ಎಸ್ಪಿ ನಾಯಕ ಮಂಜೀತ್ ಯಾದವ್ ನಡುವೆ ತೀವ್ರ ವಾಗ್ವಾದ ನಡೆದು ಕೀಳು ಮಟ್ಟದ ನಿಂದನೆಗಳು ನಡೆದಿವೆ.

3

ಈ ಘಟನೆಯಿಂದ ತೀವ್ರ ಅಸಮಾಧಾನಗೊಂಡ ಅಖಿಲೇಶ್ ಯಾದವ್ ಅವರು ನಾಯಕರನ್ನು ಹೊರಹಾಕಿದ್ದು, ತಕ್ಷಣದಿಂದ ಅನ್ವಯವಾಗುವಂತೆ ಎಟಾ ಮತ್ತು ಕಾಸಗಂಜ್ ಜಿಲ್ಲೆಗಳ ಪಕ್ಷದ ಸಂಘಟನಾ ಘಟಕಗಳನ್ನು ವಿಸರ್ಜಿಸಿ ಆದೇಶಿಸಿದ್ದಾರೆ.