ಮಾಗಡಿ ಮತ್ತು ಕುದೂರು ಭಾಗದಲ್ಲಿ ನವಿಲುಗಳು ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಹಕ್ಕಿ ಜ್ವರ (ಏವಿಯನ್ ಇನ್ಫ್ಲುಯೆಂಜಾ) ಸೋಂಕು ಇರುವುದು ದೃಢಪಟ್ಟಿದೆ.
ಅರಣ್ಯ ಇಲಾಖೆಯು ಮಾಗಡಿ ವಲಯದಲ್ಲಿ ಒಂದು ನವಿಲು ಮತ್ತು ಕುದೂರು ವ್ಯಾಪ್ತಿಯಲ್ಲಿ 7 ರಿಂದ 8 ನವಿಲುಗಳು ಮೃತಪಟ್ಟಿರುವ ಮಾಹಿತಿಯನ್ನು ಅಧಿಕೃತವಾಗಿ ದೃಢಪಡಿಸಿದೆ.
300ಕ್ಕೂ ಹೆಚ್ಚು ನವಿಲುಗಳು ಮೃತಪಟ್ಟಿವೆ ಎಂಬ ವದಂತಿಗಳನ್ನು ಅಧಿಕಾರಿಗಳು ತಳ್ಳಿಹಾಕಿದ್ದು, ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.