Health & Environment
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.10 ಲಕ್ಷ ಕ್ಯುಸೆಕ್ ನೀರು

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.10 ಲಕ್ಷ ಕ್ಯುಸೆಕ್ ನೀರು

vijaykarnataka1h
THE BRIEF
1

ಆಲಮಟ್ಟಿ ಜಲಾಶಯದಿಂದ ಬರುತ್ತಿರುವ ನೀರಿನ ಒತ್ತಡದ ಹಿನ್ನೆಲೆಯಲ್ಲಿ ಬಸವಸಾಗರ ಜಲಾಶಯದ 24 ಕ್ರಸ್ಟ್‌ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ 1.10 ಲಕ್ಷ ಕ್ಯುಸೆಕ್ ನೀರನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.

2

ಜಲಾಶಯದ ಗರಿಷ್ಠ ಮಟ್ಟ 492.25 ಮೀಟರ್ ಇದ್ದು, ಪ್ರಸ್ತುತ 492.25 ಮೀಟರ್ (ಶೇ 94.28) ನೀರು ಸಂಗ್ರಹವಿದ್ದು, ನದಿ ತೀರದ ಗ್ರಾಮಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ.

3

ನದಿ ತೀರದ ಯಳಗುಂದಿ, ಕಡದರಗಡ್ಡಿ ಸೇರಿದಂತೆ ದೇವದುರ್ಗ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದ್ದು, ನದಿಯಲ್ಲಿ ಹರಿಗೋಲು ಬಳಸದಂತೆ ಅಧಿಕಾರಿಗಳು ಸೂಚಿಸಿದ್ದಾರೆ.