ಚಿನ್ನಾಭರಣ ದೋಚಲು 80 ವರ್ಷದ ವೃದ್ಧೆ ಬೆನೆಡಿಕ್ಟ್ ಕಾರ್ಲೋ ಅವರಿಗೆ ವಿಷವುಣಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ವಿಲ್ಮಾ ಪ್ರಸ್ಚಿತಾ ಬಾರೆಟ್ಟೊ, ಚರಣ್ ಕುಮಾರ್ ಮತ್ತು ಸತೀಶ್ ಎ.ಆರ್. ಎಂಬುವವರು 2021ರ ಜನವರಿ 25ರಂದು 2.75 ಲಕ್ಷ ರೂ. ಮೌಲ್ಯದ 61.070 ಗ್ರಾಂ ಚಿನ್ನಾಭರಣವನ್ನು ಸುಲಿಗೆ ಮಾಡಿದ್ದರು.
ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗಳಿಗೆ ದಂಡ ವಿಧಿಸಿದ್ದು, ಅದರಲ್ಲಿ 25 ಸಾವಿರ ರೂ.ಗಳನ್ನು ಮೃತರ ಮಗ ರೊನಾಲ್ಡ್ ಕಾರ್ಲೋರಿಗೆ ನೀಡಲು ಆದೇಶಿಸಿದೆ.