
ತುಮಕೂರು ತಾಲೂಕಿನ ಗೌರಗೊಂಡನಹಳ್ಳಿಯಲ್ಲಿ ಉರುಳಿಗೆ ಬಿದ್ದು ಮೃತಪಟ್ಟಿದ್ದ ಚಿರತೆಯನ್ನು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರಾಯಣಪ್ಪ, ರಾಮಚಂದ್ರಯ್ಯ ಹಾಗೂ ಶಿವಕುಮಾರ್ ಎಂಬ ಮೂವರನ್ನು ಅರಣ್ಯ ಇಲಾಖೆ ಬಂಧಿಸಿದೆ.
ಸ್ಥಳದಲ್ಲಿ ಚಿರತೆಯ ಕಳೆಬರಹದ ಜೊತೆಗೆ ಕರಡಿ ಹಲ್ಲು ಮತ್ತು ಕೂದಲು ಪತ್ತೆಯಾಗಿದ್ದು, ವನ್ಯಜೀವಿ ಬೇಟೆಗಾರರ ಜಾಲದ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಅರಣ್ಯ ಇಲಾಖೆಯು ವಶಪಡಿಸಿಕೊಂಡಿರುವ ಮಾದರಿಗಳನ್ನು ಹೈದರಾಬಾದ್ನ ಸಿಸಿಎಂಬಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಫೋರೆನ್ಸಿಕ್ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.