
ಕೊಪ್ಪಳದ ದದೇಗಲ್ ಬಳಿಯ ಡಾ. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಕಳೆದ ಮೂರು ತಿಂಗಳಿಂದ ವಾರ್ಡನ್ ಕರ್ತವ್ಯಕ್ಕೆ ಹಾಜರಾಗಿಲ್ಲ.
ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ನಿಲಯದಲ್ಲಿ ಊಟಕ್ಕೆ ತರಕಾರಿ ಇಲ್ಲದಂತಾಗಿದ್ದು, ಸಿಬ್ಬಂದಿಯೇ ಸ್ವಂತ ಹಣದಿಂದ 50 ಸಾವಿರ ರೂ. ಖರ್ಚು ಮಾಡಿ ಸಾಮಗ್ರಿ ತರುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಬದಲು ಪಕ್ಕದ ವಸತಿ ನಿಲಯದಿಂದ ಅಡುಗೆಗೆ ತರಕಾರಿ ತರುವಂತೆ ಸೂಚಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.