
ಮನೆಯಲ್ಲೇ ಕೆಲಸ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ₹50 ಕೋಟಿಗೂ ಅಧಿಕ ಹಣ ವಂಚಿಸಿದ ಆರೋಪದ ಮೇಲೆ ನಾಲ್ವರನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ.
ಶ್ರೀ ಕಾಳಿಕಾದೇವಿ ಎಂಟರ್ಪ್ರೈಸಸ್ ಹೆಸರಿನಲ್ಲಿ ಭೂಮಿ ಕಿರಣ್ ಶೆಟ್ಟಿ, ಆರತಿ, ರಮ್ಯಾ ಮತ್ತು ವೆಂಕಟಾಚಲಪತಿ ಎಂಬುವರು ಈ ವಂಚನಾ ಜಾಲ ನಡೆಸುತ್ತಿದ್ದರು.
ಬಂಗಾರಪೇಟೆ ಶಾಖೆಯ ಮ್ಯಾನೇಜರ್ ವೆಂಕಟಾಚಲಪತಿ 1,121 ಜನರಿಂದ ₹10.53 ಕೋಟಿ ಸಂಗ್ರಹಿಸಿದ್ದು, ಒಟ್ಟು 8,000ಕ್ಕೂ ಹೆಚ್ಚು ಜನರು ಹಣ ಕಳೆದುಕೊಂಡಿರುವ ಶಂಕೆ ಇದೆ.