
ನಟಿ ಕಂಗನಾ ರಣಾವತ್ ಅವರ ಮಾನಸಿಕ ಸ್ಥಿತಿಯನ್ನು ಪ್ರಶ್ನಿಸಿದ್ದ ಬಾಬಾ ರಾಮ್ದೇವ್ ಅವರ ಹೇಳಿಕೆಗೆ ಕಂಗನಾ ಇನ್ಸ್ಟಾಗ್ರಾಮ್ ಮೂಲಕ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ಕಂಗನಾ ಅವರು 2024ರಲ್ಲಿ ಪತಂಜಲಿ ಸಂಸ್ಥೆಯ ಜಾಹೀರಾತು ವಿವಾದಕ್ಕಾಗಿ ಸುಪ್ರೀಂ ಕೋರ್ಟ್ನಿಂದ ರಾಮ್ದೇವ್ ಅವರಿಗೆ ಸಿಕ್ಕಿದ್ದ ಛೀಮಾರಿಯನ್ನು ಉಲ್ಲೇಖಿಸಿದ್ದಾರೆ.
ದೇಶದ ಯುವಕರನ್ನು ಗಟಾರ್ ಎಂದು ಕರೆದಿದ್ದ ಕಂಗನಾ ಅವರ ಹೇಳಿಕೆಯನ್ನು ಬಾಬಾ ರಾಮ್ದೇವ್ ಭ್ರಷ್ಟ ಮನಸ್ಸಿನ ಸಂಕೇತ ಎಂದು ಟೀಕಿಸಿದ ನಂತರ ಈ ವಾಕ್ಸಮರ ತೀವ್ರಗೊಂಡಿದೆ.