
ಹರಿಹರ ಪಂಚಮಸಾಲಿ ಮಠದ ಟ್ರಸ್ಟ್ನಿಂದ 10 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಮಠದ ಲೆಕ್ಕಕೊಡಿ ಚಳುವಳಿ ಸಮಿತಿಯು ಗಂಭೀರ ಆರೋಪ ಮಾಡಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ.
ವಿವಿಧ ಇಲಾಖೆಗಳಿಂದ ಮಠಕ್ಕೆ ಒಟ್ಟು 16 ಕೋಟಿ ರೂ. ಅನುದಾನ ಬಂದಿದ್ದು, ಕೇವಲ 6 ಕೋಟಿ ರೂ. ಕಾಮಗಾರಿ ನಡೆದಿದ್ದು ಕಟ್ಟಡವೇ ಇಲ್ಲದಿದ್ದರೂ ಕೇವಲ 44 ದಿನಗಳಲ್ಲಿ 10 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಮಿತಿ ದೂರಿದೆ.
ಅಧಿಕಾರಿಗಳು ಟ್ರಸ್ಟಿಗಳೊಂದಿಗೆ ಶಾಮೀಲಾಗಿ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಹಣ ವಸೂಲಿ ಮಾಡಬೇಕೆಂದು ಆಗ್ರಹಿಸಲಾಗಿದೆ.