
ದೆಹಲಿಯ ಜಸೋಲಾದಲ್ಲಿ ಶನಿವಾರ ಗಾಳಿಪಟ ಹಿಡಿಯಲು ಹೋಗಿ 15 ವರ್ಷದ ಮಿಥುನ್ ಎಂಬ ಬಾಲಕ ಚರಂಡಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ.
ಘಟನೆ ನಡೆದು 24 ಗಂಟೆ ಕಳೆದರೂ ಬಾಲಕನ ಸುಳಿವು ಸಿಗದ ಕಾರಣ, ಆತನ ತಂದೆ ಅವಧೇಶ್ ಸ್ವತಃ ಕೊಳಚೆ ನೀರಿನ ಚರಂಡಿಗಿಳಿದು ಹುಡುಕಾಟ ನಡೆಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ವಿಳಂಬ ಮತ್ತು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಭಾನುವಾರ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.