
ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಮಾಜಿ ಸರ್ಕಾರಿ ಬಸ್ ಚಾಲಕ ಮಿನಾರ್ ಮಂಡಲ್ ಅವರ ಮನೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 28 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ.
ದಾಳಿಯ ವೇಳೆ 21 ಕೋಟಿ ರೂ. ಮೌಲ್ಯದ 15 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು, ನಗದು ಹಣವನ್ನು ಎಣಿಸಲು ಬಳಸಿದ ಐದು ಯಂತ್ರಗಳು ಕೆಟ್ಟುಹೋಗುವಷ್ಟು ಪ್ರಮಾಣದಲ್ಲಿ ಹಣ ಪತ್ತೆಯಾಗಿದೆ.
ಈ ಅಕ್ರಮ ಸಂಪತ್ತು ಕಲ್ಲು ಕ್ವಾರಿ ಮಾಲೀಕ ಟುಲು ಮಂಡಲ್ ಅವರಿಗೆ ಸೇರಿದ್ದೆಂದು ಮಿನಾರ್ ಮಂಡಲ್ ವಿಚಾರಣೆ ವೇಳೆ ತಿಳಿಸಿದ್ದು, ಟುಲು ಮಂಡಲ್ ಟಿಎಂಸಿ ನಾಯಕ ಅನಬ್ರತಾ ಮಂಡಲ್ ಅವರ ಆಪ್ತರಾಗಿದ್ದಾರೆ.