
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ನೇಮಕಗೊಂಡ ಐಪಿಎಸ್ ಅಧಿಕಾರಿ ಭೂಷಣ್ ಬೋರಸೆ ಅವರು ಆದೇಶವಾಗಿ ಮೂರು ದಿನ ಕಳೆದರೂ ಅಧಿಕಾರ ಸ್ವೀಕರಿಸದೆ ಬೆಳಗಾವಿಯಲ್ಲೇ ಮುಂದುವರಿಯಲು ಇಚ್ಛಿಸಿದ್ದಾರೆ.
ಹಾಲಿ ಆಯುಕ್ತ ಎನ್. ಶಶಿಕುಮಾರ್ ಅವರನ್ನು ವರ್ಗಾವಣೆ ಮಾಡಿದ ನಂತರ ಈ ಹುದ್ದೆಯನ್ನು ವಹಿಸಿಕೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ನ ಆಂತರಿಕ ರಾಜಕೀಯದ ಕೈವಾಡವಿದೆ ಎಂಬ ಚರ್ಚೆಗಳು ಕೇಳಿಬರುತ್ತಿವೆ.
1989ರಲ್ಲಿ ಸ್ಥಾಪನೆಯಾದ ಈ ಆಯುಕ್ತಾಲಯವು 15 ಪೊಲೀಸ್ ಠಾಣೆಗಳನ್ನು ಹೊಂದಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಸವಾಲಿನ ಕೆಲಸವಾಗಿರುವುದರಿಂದ ಅಧಿಕಾರಿಗಳು ಈ ಹುದ್ದೆಯಿಂದ ದೂರ ಉಳಿಯಲು ಬಯಸುತ್ತಿದ್ದಾರೆ.