
ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಬಿಆರ್ಟಿಎಸ್ ಚಿಗರಿ ಬಸ್ಗಳಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಪ್ರತಿ ತಿಂಗಳು 2.5 ಕೋಟಿ ರೂಪಾಯಿ ನಷ್ಟವಾಗುತ್ತಿದೆ.
ಪ್ರತಿ ಕಿಲೋಮೀಟರ್ಗೆ 80 ರೂಪಾಯಿ ಖರ್ಚಾಗುತ್ತಿದ್ದರೆ, ಆದಾಯ ಕೇವಲ 50 ರೂಪಾಯಿ ಬರುತ್ತಿದ್ದು, ಕಿಲೋಮೀಟರ್ಗೆ 30 ರೂಪಾಯಿ ನಷ್ಟ ಉಂಟಾಗುತ್ತಿದೆ.
2018ರಿಂದ ಇಲ್ಲಿಯವರೆಗೆ ನಗರಾಭಿವೃದ್ಧಿ ಇಲಾಖೆಯು ಸಂಸ್ಥೆಗೆ ನೀಡಬೇಕಾದ 150 ಕೋಟಿ ರೂಪಾಯಿಗೂ ಹೆಚ್ಚಿನ ಹಿಂಬಾಕಿ ಹಣವನ್ನು ಇನ್ನೂ ಪಾವತಿಸಿಲ್ಲ ಎಂದು ವರದಿಯಾಗಿದೆ.