
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹೊಸಪೇಟೆಯಲ್ಲಿ ನಡೆದ 70 ಕಿ.ಮೀ. ಸೈಕಲ್ ರೇಸ್ನಲ್ಲಿ ಕಲ್ಲಮ್ಂಗುಡಿಯ ಎರ್ರಿಸ್ವಾಮಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ.
ಜೈಸಿಂಗಪುರದಿಂದ ನಗರದವರೆಗೆ ನಡೆದ 16 ಕಿ.ಮೀ. ಓಟದ ಸ್ಪರ್ಧೆಯಲ್ಲಿ ಸಂಕ್ಲಾಪುರದ ಜಿ.ಶಿವಮೂರ್ತಿ ಪ್ರಥಮ ಸ್ಥಾನ ಗಳಿಸಿದರೆ, ಗುಡ್ಡ ಹತ್ತುವ ಸ್ಪರ್ಧೆಯಲ್ಲಿ ಮಾರುತಿ ಪ್ರಥಮ ಬಹುಮಾನ ಪಡೆದಿದ್ದಾರೆ.
ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿಯ ಅಧ್ಯಕ್ಷ ಪಿ.ವೆಂಕಟೇಶ್ ನೇತೃತ್ವದಲ್ಲಿ ನಡೆದ ಈ ಗ್ರಾಮೀಣ ಕ್ರೀಡಾಕೂಟದಲ್ಲಿ ತಳವಾರಕೆರೆಯ ಹರೀಶ ಸೈಕಲ್ ರೇಸ್ನಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.