
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ, 15 ವರ್ಷದ ವೈಭವ್ ಸೂರ್ಯವಂಶಿ ಈಸ್ಟ್ ಝೋನ್ ತಂಡದ ಹಂಗಾಮಿ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ನಿಯಮಿತ ನಾಯಕ ಇಶಾನ್ ಕಿಶನ್ ಅವರು ಪಂದ್ಯದ ಮೊದಲ ದಿನದ 19ನೇ ಓವರ್ನಲ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡು ಮೈದಾನದಿಂದ ಹೊರನಡೆದಿದ್ದರಿಂದ, ಉಪನಾಯಕನಾಗಿದ್ದ ವೈಭವ್ಗೆ ನಾಯಕತ್ವದ ಅವಕಾಶ ಸಿಕ್ಕಿದೆ.
ನಾಯಕನಾಗಿ ತನ್ನ ಮೊದಲ ನಿರ್ಧಾರದಲ್ಲೇ ವೈಭವ್ ಚಾಣಾಕ್ಷತನದಿಂದ ಡಿಆರ್ಎಸ್ (DRS) ತೆಗೆದುಕೊಂಡು, 40ನೇ ಓವರ್ನಲ್ಲಿ ಸೆಂಟ್ರಲ್ ಝೋನ್ ಬ್ಯಾಟರ್ ಆರ್ಯನ್ ಜುಯಾಲ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.