
ದಕ್ಷಿಣ ಕನ್ನಡದ ಉಜಿರೆ ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜು ಬಳಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ಅದನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಆನೆಗೆ ಎರಡು ಗುಂಡುಗಳು ತಗುಲಿರುವ ಶಂಕೆ ಇದೆ.
ಬೆಳಗ್ಗೆ 8:30ಕ್ಕೆ ಆನೆ ಕಾಣಿಸಿಕೊಂಡಿದ್ದರೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸಿಬ್ಬಂದಿಯ ಪರದಾಟಕ್ಕೆ ಕಾರಣವಾಗಿದ್ದು, ಆನೆ ಕೆರಳುವ ಭೀತಿಯಿಂದ ಕಾರ್ಯಾಚರಣೆಯನ್ನು ಸದ್ಯ ಸ್ಥಗಿತಗೊಳಿಸಲಾಗಿದೆ.
ಭಾನುವಾರ ರಜೆ ಇದ್ದಿದ್ದರಿಂದ ಅನಾಹುತ ತಪ್ಪಿದ್ದು, ಸೋಮವಾರ ಕಾಲೇಜು ಆರಂಭವಾಗುವುದರಿಂದ ಆನೆಯನ್ನು ಕಾಡಿಗೆ ಅಟ್ಟಲು ಅರಣ್ಯ ಸಿಬ್ಬಂದಿ ರಾತ್ರಿಯಿಡೀ ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.