
ಧಾರವಾಡ ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆ ಉತ್ತಮವಾಗಿ ಬಂದಿದ್ದರೂ, ಮಾರುಕಟ್ಟೆಯಲ್ಲಿ ದರ ತೀವ್ರ ಕುಸಿತ ಕಂಡಿರುವುದರಿಂದ ರೈತರು ಕಟಾವು ಮಾಡದೆ ಗಿಡದಲ್ಲಿಯೇ ಬಿಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ 10 ಕೆಜಿ ಮೆಣಸಿನಕಾಯಿಗೆ ಕೇವಲ 80 ರಿಂದ 100 ರೂಪಾಯಿ ದರ ನಿಗದಿಪಡಿಸಲಾಗುತ್ತಿದ್ದು, ಇದು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನೂ ಭರಿಸಲು ಸಾಕಾಗುತ್ತಿಲ್ಲ.
ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರು, ಕನಿಷ್ಠ ಕೆಜಿಗೆ 25 ರೂಪಾಯಿ ದರ ಸಿಗದಿದ್ದರೆ ಮುಂದಿನ ಬೆಳೆಯ ಬಗ್ಗೆ ಯೋಚಿಸುವುದೂ ಕಷ್ಟ ಎಂದು ಅಳಲು ತೋಡಿಕೊಂಡಿದ್ದಾರೆ.