Entertainment
ಟಿ.ಎಸ್.ನಾಗಾಭರಣ ಸೇರಿದಂತೆ ಕರ್ನಾಟಕದ 9 ಸಾಧಕರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

ಟಿ.ಎಸ್.ನಾಗಾಭರಣ ಸೇರಿದಂತೆ ಕರ್ನಾಟಕದ 9 ಸಾಧಕರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

prajavani2h
THE BRIEF
1

ನವದೆಹಲಿಯ ಭಾರತೀಯ ವಿಜ್ಞಾನ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕದ ಒಂಬತ್ತು ಸಾಧಕರು ಸೇರಿದಂತೆ ದೇಶದ 115 ಕಲಾವಿದರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು.

2

ಕರ್ನಾಟಕದ ಹಿರಿಯ ಮೃದಂಗ ವಾದಕ ಎ.ವಿ.ಆನಂದ್ ಅವರಿಗೆ ಪ್ರತಿಷ್ಠಿತ 'ಅಕಾಡೆಮಿ ರತ್ನ ಪ್ರಶಸ್ತಿ' ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅವರಿಗೆ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

3

ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ಶಾಸ್ತ್ರೀಯ ಸಂಗೀತಗಾರರಾದ ಕೆ.ವಾಗೀಶ್, ಟಿ.ಎಸ್.ಸತ್ಯವತಿ, ಜ್ಯೋತಿ ಹೆಗಡೆ, ಅನೂರು ಅನಂತಕೃಷ್ಣ ಶರ್ಮಾ, ವೀಣಾ ಮೂರ್ತಿ ವಿಜಯ್ ಮತ್ತು ಎಸ್.ಸಿ.ಶರ್ಮಾ ಅವರು ಪ್ರಶಸ್ತಿ ಸ್ವೀಕರಿಸಿದ ಇತರ ಸಾಧಕರಾಗಿದ್ದಾರೆ.