
ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು, ಜುಲೈ 30ರಂದು ಆಲಮಟ್ಟಿ ಜಲಾಶಯಕ್ಕೆ 68,525 ಕ್ಯೂಸೆಕ್ ನೀರು ಹರಿದುಬರುತ್ತಿದೆ.
ಲಿಂಗನಮಕ್ಕಿ ಜಲಾಶಯದಲ್ಲಿ 45.45 ಟಿಎಂಸಿ ಮತ್ತು ತುಂಗಭದ್ರಾ ಜಲಾಶಯದಲ್ಲಿ 35.09 ಟಿಎಂಸಿ ನೀರಿನ ಸಂಗ್ರಹವಿದ್ದು, ರೈತರಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಹೊಸ ಭರವಸೆ ಮೂಡಿದೆ.
ಹೇಮಾವತಿ ಅಣೆಕಟ್ಟಿನಲ್ಲಿ 24 ಟಿಎಂಸಿ ಮತ್ತು ಕಬಿನಿ ಜಲಾಶಯದಲ್ಲಿ 14.70 ಟಿಎಂಸಿ ನೀರು ಸಂಗ್ರಹವಾಗಿದ್ದು, ಮುಂಗಾರು ಮಳೆ ಚುರುಕು ಪಡೆದಿರುವುದು ಜಲಾಶಯಗಳ ಮಟ್ಟ ಏರಿಕೆಗೆ ಕಾರಣವಾಗಿದೆ.