
ಮಂಡ್ಯ ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ 48,594 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರ ₹54.53 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಜಿಲ್ಲೆಯ ಏಳು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ನಾಗಮಂಗಲದಲ್ಲಿ 18,762 ಹೆಕ್ಟೇರ್ ಮತ್ತು ಕೆ.ಆರ್.ಪೇಟೆಯಲ್ಲಿ 12,883 ಹೆಕ್ಟೇರ್ ಬೆಳೆ ನಾಶವಾಗಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ.
ಈ ಬಾರಿ 2,06,835 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದರೂ, ಮಳೆ ವೈಫಲ್ಯದಿಂದ ಕೇವಲ 37,873 ಹೆಕ್ಟೇರ್ ಅಂದರೆ ಶೇ 18.3 ರಷ್ಟು ಮಾತ್ರ ಬಿತ್ತನೆ ಪ್ರಗತಿಯಾಗಿದೆ.