
ಬೆಳಗಾವಿ ಜಿಲ್ಲೆಯ ಕಮತನೂರು ಗ್ರಾಮ ಪಂಚಾಯಿತಿ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಮತ್ತು ಹೆಣ್ಣು ಮಕ್ಕಳ ಶಿಕ್ಷಣ ಉತ್ತೇಜಿಸಲು 'ಮನೆ ಮಹಾಲಕ್ಷ್ಮಿ' ಎಂಬ ವಿನೂತನ ಯೋಜನೆಯನ್ನು ಆಗಸ್ಟ್ 15ರಂದು ಜಾರಿಗೆ ತಂದಿದೆ.
ಈ ಯೋಜನೆಯಡಿ ಗ್ರಾಮದಲ್ಲಿ ಜನಿಸುವ ಮೊದಲ ಹೆಣ್ಣು ಮಗುವಿಗೆ 5,000 ರೂಪಾಯಿಗಳ ಆರ್ಥಿಕ ನೆರವನ್ನು ಚೆಕ್ ರೂಪದಲ್ಲಿ ನೀಡಲಾಗುತ್ತಿದೆ.
ಪಂಚಾಯಿತಿಯು ಮೂಲಭೂತ ಸೌಕರ್ಯಗಳಿಗಾಗಿ ಸಂಗ್ರಹಿಸುವ ತೆರಿಗೆ ಹಣದ ಒಂದು ಭಾಗವನ್ನು ಉಳಿತಾಯ ಮಾಡಿ, ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಮೀಸಲಿಟ್ಟ ರಾಜ್ಯದ ಮೊದಲ ಪಂಚಾಯಿತಿ ಇದಾಗಿದೆ.