ನೇಪಾಳದಲ್ಲಿ ಭೀಕರ ಪ್ರವಾಹದಿಂದಾಗಿ ರಸ್ತೆ ಕೊಚ್ಚಿಹೋಗುವ ಕೆಲ ನಿಮಿಷಗಳ ಮುನ್ನ ಟೀ ಬ್ರೇಕ್ ತೆಗೆದುಕೊಂಡಿದ್ದ ಛತ್ತೀಸಗಢದ ಐವರು ಪ್ರವಾಸಿಗರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಯ್ಪುರದ ಮಾನಾ ಕ್ಯಾಂಪ್ ನಿವಾಸಿಗಳಾದ 50 ರಿಂದ 60 ವರ್ಷ ವಯಸ್ಸಿನ ಈ ಐವರು ಪ್ರವಾಸಿಗರು, ಆಗಸ್ಟ್ 26 ರಂದು ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಪ್ರವಾಹದ ನಂತರ ಅದೇ ಸ್ಥಳದಲ್ಲಿ ಬಾಡಿಗೆ ಕಾರಿನಲ್ಲಿ ಎರಡು ದಿನ ಕಳೆದಿದ್ದ ಪ್ರವಾಸಿಗರಿಗೆ, ಸ್ಥಳೀಯ ಮಹಿಳೆಯರು ರಾಖಿ ಕಟ್ಟಿ ಸಾಂತ್ವನ ಹೇಳಿದ್ದಾರೆ.