
ವಿದ್ಯಾರ್ಥಿಗಳಲ್ಲಿನ ಖಿನ್ನತೆ ಮತ್ತು ಪರೀಕ್ಷಾ ಒತ್ತಡವನ್ನು ನಿವಾರಿಸಲು ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ವಿಶೇಷ ಮಾನಸಿಕ ಆರೋಗ್ಯ ಬೆಂಬಲ ಯೋಜನೆಯನ್ನು ಜಾರಿಗೆ ತರುತ್ತಿವೆ.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಆಪ್ತಸಮಾಲೋಚನೆಗಾಗಿ ತರಬೇತಿ ಪಡೆದ ಕೌನ್ಸಿಲರ್ಗಳನ್ನು ನೇಮಿಸಲಾಗುವುದು ಅಥವಾ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುವುದು.
ವಿದ್ಯಾರ್ಥಿಗಳಿಗೆ ಯೋಗ, ಧ್ಯಾನದಂತಹ ಒತ್ತಡ ನಿರ್ವಹಣಾ ಕಾರ್ಯಾಗಾರಗಳನ್ನು ಆಯೋಜಿಸುವುದಲ್ಲದೆ, ಟೆಲಿ-ಮಾನಸ ಸಹಾಯವಾಣಿಯನ್ನು ಶಾಲಾ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.