
ಕೊಪ್ಪಳ ಜಿಲ್ಲೆಯ ಕಿಷ್ಕಿಂಧಾ ಬೆಟ್ಟಗಳ ಅರಣ್ಯ ಪ್ರದೇಶದಲ್ಲಿ 50 ವರ್ಷಗಳ ನಂತರ ಹುಲಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ಅದರ ಚಲನವಲನ ಸೆರೆಯಾಗಿದೆ.
ಹುಲಿ ಆಂಧ್ರಪ್ರದೇಶದ ಶ್ರೀಶೈಲಂ ವನ್ಯಜೀವಿ ಕಾರಿಡಾರ್ ಮೂಲಕ ವಲಸೆ ಬಂದಿರಬಹುದು ಎಂದು ಅರಣ್ಯ ತಜ್ಞರು ಶಂಕಿಸಿದ್ದು, ಕಳೆದ ಮೂರು ತಿಂಗಳಿಂದ ಈ ಭಾಗದಲ್ಲಿ ಹುಲಿ ಇರುವಿಕೆ ಬಗ್ಗೆ ಮಾಹಿತಿ ಇತ್ತು.
ಹಂಪಿ ಸುತ್ತಮುತ್ತಲಿನ ಸಾಣಾಪುರ, ಬಸಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಅರಣ್ಯ ಇಲಾಖೆ ಸೈರನ್ ಮೂಲಕ ಎಚ್ಚರಿಕೆ ನೀಡಿದ್ದು, ರಾತ್ರಿ ವೇಳೆ ಹೊರಗೆ ಮಲಗದಂತೆ ಜನರಿಗೆ ಸೂಚಿಸಿದೆ.