
ಕೇರಳದ ರೈತ ಕೆ.ಕೆ. ಕ್ಸೇವಿಯರ್ ತಮ್ಮ 3.5 ಎಕರೆ ತೋಟದಲ್ಲಿ ಜೈವಿಕ ಪದ್ಧತಿಗಳನ್ನು ಅಳವಡಿಸಿ ವರ್ಷಕ್ಕೆ ಸುಮಾರು ₹14.55 ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಅವರ ತೋಟದಲ್ಲಿನ 97 ತೆಂಗಿನ ಮರಗಳಿಂದ ವರ್ಷಕ್ಕೆ ಸರಾಸರಿ 48,500 ಕಾಯಿಗಳು ಸಿಗುತ್ತಿದ್ದು, ಪ್ರತಿ ಮರಕ್ಕೆ 500 ಕಾಯಿಗಳ ಇಳುವರಿ ಬರುತ್ತಿದೆ.
ರಾಸಾಯನಿಕ ಗೊಬ್ಬರಗಳ ಬದಲಿಗೆ ನೈಸರ್ಗಿಕ ಪೋಷಕಾಂಶಗಳನ್ನು ಬಳಸುವುದರಿಂದ ಉತ್ತಮ ಫಸಲು ಪಡೆಯಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.