
ಜೈಪುರದ 90 ವರ್ಷದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಗಣಪತಿ ಸಿಂಗ್ ಭಂಡಾರಿ ಅವರನ್ನು ಸೈಬರ್ ವಂಚಕರು 15 ದಿನಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ ₹2.50 ಕೋಟಿ ಸುಲಿಗೆ ಮಾಡಿದ್ದಾರೆ.
ಜುಲೈ 28ರಂದು ಆರಂಭವಾದ ಈ ವಂಚನೆಯಲ್ಲಿ, ಆರೋಪಿಗಳು ಸಿಬಿಐ ಅಧಿಕಾರಿ ಮತ್ತು ಆರ್ಬಿಐ ವ್ಯವಸ್ಥಾಪಕರ ಸೋಗಿನಲ್ಲಿ ಆಗಸ್ಟ್ 3ರಿಂದ 10ರವರೆಗೆ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.
ಪಿಪಿಎಫ್ ಖಾತೆಯಿಂದಲೂ ಹಣ ವರ್ಗಾಯಿಸಲು ಯತ್ನಿಸಿದಾಗ ಎಸ್ಬಿಐ ಬ್ಯಾಂಕ್ ವ್ಯವಸ್ಥಾಪಕರು ಅನುಮಾನಗೊಂಡು ಎಚ್ಚರಿಸಿದ ನಂತರ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.