
ಕೊಪ್ಪಳದ ಸರೋಜಮ್ಮ ಬಡಾವಣೆಯ 119 ನಿವೇಶನಗಳ ಪೈಕಿ, ಲಾಟರಿ ಪ್ರಕ್ರಿಯೆಯನ್ನು ಉಲ್ಲಂಘಿಸಿ ಒಂದೇ ಕುಟುಂಬದ 9 ಮಂದಿಗೆ ಅನಧಿಕೃತವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಹಿಂದಿನ ಜಿಲ್ಲಾಧಿಕಾರಿ ನಳಿನ್ ಅತುಲ್ ಅಧ್ಯಕ್ಷತೆಯಲ್ಲಿ 87 ನಿವೇಶನಗಳಿಗೆ ಲಾಟರಿ ನಡೆಸಲಾಗಿತ್ತು, ಆದರೆ ಕೇವಲ 24 ಮಂದಿಗೆ ಮಾತ್ರ ನಿವೇಶನ ವಿತರಣೆಯಾಗಿದ್ದು, ಉಳಿದ 63 ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ.
ಈ ಪ್ರಕರಣದಲ್ಲಿ ಮಾಜಿ ಆಯುಕ್ತ ಯೋಗಾನಂದ ಮತ್ತು ಹೊರಗುತ್ತಿಗೆ ನೌಕರರು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ನಿವೇಶನ ರದ್ದುಗೊಳಿಸುವ ಚಿಂತನೆಯಲ್ಲಿದ್ದಾರೆ.