
ಪ್ರಧಾನಿ ನರೇಂದ್ರ ಮೋದಿ ಅವರು ವಡೋದರಾದಲ್ಲಿ 20,700 ಕೋಟಿ ರೂ. ವೆಚ್ಚದ ಪಶ್ಚಿಮ ಕಾರಿಡಾರ್ನ ಅಂತಿಮ ವಿಭಾಗಗಳನ್ನು ಲೋಕಾರ್ಪಣೆ ಮಾಡುವ ಮೂಲಕ ಒಟ್ಟು 2,800 ಕಿ.ಮೀ. ಉದ್ದದ ಸರಕು ಸಾಗಣೆ ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.
ಈ ಕಾರಿಡಾರ್ನಲ್ಲಿ ಪ್ರತಿದಿನ 430ಕ್ಕೂ ಹೆಚ್ಚು ಸರಕು ರೈಲುಗಳು ಸಂಚರಿಸಲಿದ್ದು, ಹಿಂದೆ 30 ಗಂಟೆ ತೆಗೆದುಕೊಳ್ಳುತ್ತಿದ್ದ ಸರಕು ಸಾಗಣೆ ಸಮಯವನ್ನು 10 ರಿಂದ 12 ಗಂಟೆಗಳಿಗೆ ಇಳಿಸಲಿದೆ.
ಸನಂದ್-ಮಕರಪುರ, ನ್ಯೂ ಉಂಬರ್ಗಾಂವ್-ನ್ಯೂ ಸಫಲೆ ಮತ್ತು ನ್ಯೂ ಸಫಲೆ-ಜೆಎನ್ಪಿಟಿ ಒಳಗೊಂಡ 326 ಕಿ.ಮೀ. ಮಾರ್ಗವು ಜೆಎನ್ಪಿಟಿ ಬಂದರಿಗೆ ನೇರ ಸಂಪರ್ಕ ಕಲ್ಪಿಸುವುದರಿಂದ ಸಾರಿಗೆ ವೆಚ್ಚ ಮತ್ತು ಇಂಧನ ಉಳಿತಾಯವಾಗಲಿದೆ.