
ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ತಮ್ಮ ವಿರುದ್ಧ ಹೇಳಿಕೆ ನೀಡಿದ್ದ ರಾಖಿ ಸಾವಂತ್ ಅವರನ್ನು ಸೋತ ಮತ್ತು ಕಹಿ ಮನಸ್ಸಿನ ವ್ಯಕ್ತಿ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಹಾಗೂ ಸ್ಮೃತಿ ಇರಾನಿ ಬಗ್ಗೆ ರಾಖಿ ಮಾಡಿದ್ದ ಟೀಕೆಗಳು ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ, ಸೋತ ಜನರು ಯಶಸ್ವಿ ಮಹಿಳೆಯರ ಚಾರಿತ್ರ್ಯ ವಧೆ ಮಾಡಲು ಯತ್ನಿಸುತ್ತಾರೆ ಎಂದು ಕಂಗನಾ ಕಿಡಿಕಾರಿದ್ದಾರೆ.
ಪೌರಕಾರ್ಮಿಕನ ಕೆಲಸ ಸಿಗಬೇಕಾದರೂ ಅರ್ಹತೆ ಬೇಕು ಎಂದು ಕುಟುಕಿರುವ ಕಂಗನಾ, ಮಾಧ್ಯಮಗಳ ಗಮನ ಸೆಳೆಯಲು ತಮ್ಮ ಹೆಸರನ್ನು ಬಳಸಿಕೊಳ್ಳಬೇಡಿ ಎಂದು ಎಚ್ಚರಿಸಿದ್ದಾರೆ.