ಅಕ್ಟೋಬರ್ 6 ರಂದು ನಡೆಯಲಿರುವ ಪಶ್ಚಿಮ ಬಂಗಾಳ ಉಪಚುನಾವಣೆಯಲ್ಲಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಹಾಗೂ ಅದರ ‘ಹೂವು ಹಾಗೂ ಹುಲ್ಲು’ ಚಿಹ್ನೆಯನ್ನು ಚುನಾವಣಾ ಆಯೋಗವು ತಾತ್ಕಾಲಿಕವಾಗಿ ಮತಪತ್ರದಿಂದ ತೆಗೆದುಹಾಕಿದೆ.
ಮಮತಾ ಬ್ಯಾನರ್ಜಿ ಹಾಗೂ ಅನೂಪ್ ರಾಯ್ ಬಣಗಳ ವಾದಗಳನ್ನು ಆಲಿಸಿದ ಆಯೋಗವು, ಉಭಯ ಬಣಗಳು ಸೆಪ್ಟೆಂಬರ್ 18ರ ಬೆಳಿಗ್ಗೆ 11 ಗಂಟೆಯೊಳಗೆ ತಮ್ಮ ಆಯ್ಕೆಯ ಹೊಸ ಹೆಸರು ಹಾಗೂ ಮೂರು ಚಿಹ್ನೆಗಳನ್ನು ಸೂಚಿಸುವಂತೆ ನಿರ್ದೇಶಿಸಿದೆ.
ಚುನಾವಣಾ ಆಯೋಗದ ಈ ಮಧ್ಯಂತರ ಆದೇಶವು ಕಾನೂನುಬಾಹಿರ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಟೀಕಿಸಿದ್ದು, ಬಂಡಾಯ ಗುಂಪಿನ ಶಾಸಕ ಅಕ್ರಾಮುದ್ದೀನ್ ಅನ್ಸಾರಿ ಆಯೋಗದ ಆದೇಶವನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ.