
ಎಂಬಿಎ ಪದವೀಧರರಾದ ಇಬ್ಬರು ಸಹೋದರರು ತಮ್ಮ ಉದ್ಯೋಗಗಳನ್ನು ತ್ಯಜಿಸಿ, 8 ಲಕ್ಷ ರೂಪಾಯಿ ಬಂಡವಾಳದೊಂದಿಗೆ ಸಾವಯವ ಕೃಷಿ ಆರಂಭಿಸಿ, ಇಂದು 800 ಕೋಟಿ ರೂಪಾಯಿ ಮೌಲ್ಯದ ಕೃಷಿ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಆರಂಭದಲ್ಲಿ ಪ್ರತಿ ಕೆಜಿ ಪಪ್ಪಾಯಿಗೆ ಕೇವಲ 4 ರೂಪಾಯಿಗೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದ ಇವರು, ನಂತರ ಮೌಲ್ಯವರ್ಧಿತ ಉತ್ಪನ್ನಗಳಾದ ದೇಸಿ ಹಸುವಿನ ಶುದ್ಧ ತುಪ್ಪ ಮತ್ತು ಸಾವಯವ ಬೆಲ್ಲ ತಯಾರಿಸಲು ಮುಂದಾದರು.
ತಮ್ಮ ಉತ್ಪನ್ನಗಳನ್ನು ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸಲು ಪ್ರತಿ ವೀಕೆಂಡ್ನಲ್ಲಿ 350 ಕಿಲೋಮೀಟರ್ ದೂರದ ಮುಂಬೈಗೆ ಪ್ರಯಾಣಿಸಿ ಮಾರಾಟ ಮಾಡುತ್ತಿದ್ದರು.