
ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಡಲಿದ್ದು, ಜನರು ಅನ್ನ ಮತ್ತು ನೀರಿಗೆ ಕಷ್ಟಪಡುವ ಪರಿಸ್ಥಿತಿ ಬರಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಬಂಡಿಕೋಡಿಗೆಹಳ್ಳಿಯ ಶನೇಶ್ವರ ದೇವಸ್ಥಾನದ ಲಕ್ಷದೀಪೋತ್ಸವದಲ್ಲಿ ಮಾತನಾಡಿದ ಅವರು, ಹಿಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗಲಿದೆ ಎಂದು ತಿಳಿಸಿದ್ದಾರೆ.
ಪ್ರಕೃತಿಯ ಮೇಲೆ ಮನುಷ್ಯನ ಅತಿಯಾದ ಹಸ್ತಕ್ಷೇಪ ಮತ್ತು ಭೂಗರ್ಭದ ಬಂಡೆಗಳನ್ನು ಒಡೆಯುತ್ತಿರುವುದು ಪ್ರವಾಹ ಹಾಗೂ ಭೂಕುಸಿತದಂತಹ ನೈಸರ್ಗಿಕ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.