
ತಮಿಳುನಾಡಿನ ನಿವೃತ್ತ ಗ್ರಂಥಪಾಲಕ ಪಾಲಂ ಕಲ್ಯಾಣಸುಂದರಂ ಅವರು ತಮ್ಮ ಪಿಂಚಣಿ ಮತ್ತು ಪ್ರಶಸ್ತಿ ಹಣವಾದ ಕೋಟ್ಯಂತರ ರೂಪಾಯಿಯನ್ನು ಬಡವರ ಕಲ್ಯಾಣಕ್ಕಾಗಿ ದಾನ ಮಾಡಿ ಮಾದರಿಯಾಗಿದ್ದಾರೆ.
85 ವರ್ಷದ ಕಲ್ಯಾಣಸುಂದರಂ ಅವರಿಗೆ 2023ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಅವರು ಇವರ ಸಮಾಜ ಸೇವೆಯನ್ನು ಗುರುತಿಸಿ ಫಾದರ್ ಎಂದು ಗೌರವಿಸಿದ್ದಾರೆ.
35 ವರ್ಷಗಳ ಕಾಲ ಗ್ರಂಥಪಾಲಕರಾಗಿ ಕೆಲಸ ಮಾಡಿದ ಅವರು, ತಮ್ಮ ಸಂಪೂರ್ಣ ವೇತನವನ್ನು ಅನಾಥ ಮಕ್ಕಳ ಶಿಕ್ಷಣ ಮತ್ತು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ.