
ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಅನುಷ್ಠಾನ ಮತ್ತು ಸಚಿವರ ವೈಯಕ್ತಿಕ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 7ರಂದು ಮಹತ್ವದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ.
ಜನ್ ಧನ್, ಉಜ್ವಲ, ಪಿಎಂ ಆವಾಸ್, ಆಯುಷ್ಮಾನ್ ಭಾರತ್ ಮತ್ತು ಜಲ ಜೀವನ್ ಮಿಷನ್ನಂತಹ ಯೋಜನೆಗಳು ತಳಮಟ್ಟದಲ್ಲಿ ಬೀರಿದ ಪರಿಣಾಮವನ್ನು ಈ ಸಭೆಯಲ್ಲಿ ಮುಖ್ಯ ಮಾನದಂಡವಾಗಿ ಇರಿಸಲಾಗಿದೆ.
ಸಚಿವರ ಕಾರ್ಯಕ್ಷಮತೆಯ ಆಧಾರದ ಮೇಲೆ ಇಲಾಖೆಗಳಿಗೆ ಹೊಸ ಗುರಿಗಳನ್ನು ನಿಗದಿಪಡಿಸುವುದು ಅಥವಾ ಸಂಪುಟದಲ್ಲಿ ಅಗತ್ಯ ಬದಲಾವಣೆಗಳನ್ನು ತರುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.