
ಕರ್ನಾಟಕದ ಆರ್ಥಿಕತೆಯನ್ನು 2047ರ ವೇಳೆಗೆ 3 ಟ್ರಿಲಿಯನ್ ಡಾಲರ್ ಅಂದರೆ ₹320 ಲಕ್ಷ ಕೋಟಿಗೆ ಏರಿಸುವ ಗುರಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ರಾಜ್ಯದ ತಲಾ ಆದಾಯ ₹4.33 ಲಕ್ಷಕ್ಕೆ ತಲುಪಿದ್ದು, ಜಿಎಸ್ಟಿ ಮತ್ತು ಆದಾಯ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.
ರೈತರಿಗಾಗಿ ರೈತ ಚೈತನ್ಯ ಮತ್ತು ರೈತ ಮಿತ್ರ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, 12.35 ಲಕ್ಷ ರೈತರಿಗೆ ಬೆಳೆ ವಿಮೆ ಅಡಿ ₹1,300 ಕೋಟಿ ಪರಿಹಾರ ನೀಡಲಾಗಿದೆ.